ಪದ್ಯ
ಯಾವುದಕ್ಕೂ ಅಸ್ತಿತ್ವವಿಲ್ಲ,
ನಾನು ಮುಟ್ಟಿದ್ದು
ಅವಳಿಗೆ ನೆನಪಷ್ಟೇ,
ಒಂದೂ ಗುರುತಿಲ್ಲ!!



ಪ್ರತಿ ಪದ್ಯ
ಕುರುಹೇ ಇಲ್ಲ
ಎಂದುಕೊಂಡವ
ಅವಳ ಕಂಕುಳಲ್ಲಿ
ಮಗು ನಕ್ಕಾಗ
ಬೆಚ್ಚಿ ಬಿದ್ದ!
*****
ಮಳೆ ಹನಿಗೆ ಬಣ್ಣವಿಲ್ಲ
ಹಾಗಂದವರು ಯಾರು?
ಫಳ್ಳನೇ ನಿನ್ನ ಕಣ್ಣಂಚಲ್ಲಿ
ಮಿಂಚಿದ್ದು ಯಾವ ಬಣ್ಣ?


ಸರಿರಾತ್ರಿಯಲ್ಲೂ
ಮೈಯೆಲ್ಲಾ ಸವರಿ
ಹೋಯಿತೆಲ್ಲಾ..
ಅದಲ್ಲವೇ ಬಣ್ಣ?


ಕಿಟಕಿಯಾಚೆ ಹನಿ ಸಿಡಿದಾಗ
ಬೆರಳೊಡ್ಡಿ, ಮುಖಕ್ಕೆ
ಮುಖಕ್ಕೆ ಸವರಿಕೊಳ್ಳುವೆಯಲ್ಲ
ಅದಲ್ಲವೆ ಬಣ್ಣ?
******
ಸರಿ ರಾತ್ರಿಗಳಲ್ಲಿ ಕೇಳಿದ
ಹಾಡುಗಳೆಲ್ಲಾ ಈಗ
ಸುಮ್ಮನೆ ಮಲಗಿವೆ..
ನಿನ್ನ ಹೆಸರಿನ ಕನವರಿಕೆಗಳಿಗೆ
ಸಮಾಧಾನ ಹೇಳಬೇಕಿತ್ತು
ಮರೆತೆ.
ಹೆಜ್ಜೆ ಜೊತೆಯಾಗಿ
ಸಂಜೆ ಹಿತವಾಗಿ
ಸವೆಸಿದ ಹಾದಿಗುಂಡ
ನಿನ್ನ ಬೆರಳ ತುದಿ
ಮುಟ್ಟುವುದಕ್ಕೆ
ಹಾತೊರೆದೆ, ನೀನು
ಸಂಜೆಗತ್ತಲಲ್ಲಿ ಕರಗಿದೆ..


2 ಹೀಗಂತಾರೆ:

Hema ಹೇಳಿದರು... 9:58 AM  

salugalu chennagide- hema.

govind ಹೇಳಿದರು... 12:26 PM  

ee padya tumba chennagide...saalugalu yedeguudige sikku bikkalisuvanthe maduttave...

ಮಹಾತ್ಮ

ಮಹಾತ್ಮ

ಹುಡುಕೋಕೆ..

ಲೋಡ್ ಆಗುತ್ತಿದೆ...

About this blog


ಒಳಗೂ.. ಹೊರಗೂ ಎಂದ ಮೇಲೆ ಇನ್ನೇನು ಹೇಳಬೇಕು. ಹೊರಗಿನಿಂದಕ್ಕೆ ಸ್ಪಂದಿಸುವ ಒಳಗನ್ನೂ.. ಒಳಗಿನ ಮಾತನ್ನು ಕೇಳುತ್ತಾ ಹೊರಗಿನ ಜೊತೆ ನಡೆಯುವುದನ್ನೂ. ಮಾಡುತ್ತಲೇ ಇರುತ್ತೇವೆ. ತಪ್ಪು ಸರಿಗಳ ವಿವೇಚನೆ ಗೊತ್ತಿದ್ದು, ಗೊತ್ತಿಲ್ಲದೆ, ಕಲಿತು, ಮರೆತು ಬದುಕುತ್ತಲೇ ಇರುತ್ತೇವೆ. ಅವುಗಳ ಬಗ್ಗೆ ಒಮ್ಮೆ ಸಮಾಧಾನಕ್ಕೆ, ಖುಷಿಗೆ, ಓದಿದವರು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ, ಬರೆಯುವ ಮತ್ತು ಓದುವ ಕಾಲದಲ್ಲೇ ಹೊಳೆದು ಬಿಡಬಹುದಾದ ಸಂಗತಿಗಳಿಗಾಗಿ.. ಬರೆಯುವ ಹಟ ಮತ್ತು ಚಟ.ಥೇಟ್ ಕೆರೆ-ದಡದ ಆಟ. ನೆಟ್ಟಿರಲಿ ಇಲ್ಲಿ ನಿಮ್ಮ ನೋಟ....

ಬ್ಲಾಗ್ ಆರ್ಕೈವ್